ಬಂಗಾರ ನೀರ ಕಡಲಾಚೆ

ಹೊಸ ದ್ವೀಪಗಳಿಗೆ ಹೋರಾಟನ ಬನ್ನಿ ಅಂದದೋ ಅಂದದಹೊಸ ದ್ವೀಪಗಳಿಗೆ ಹೋರಾಟನ ಬನ್ನಿ ಅಂದದೋ ಅಂದದ ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಮಿಂಚು ಬಳಗ ತೆರೆ-ತೆರೆಗಳಾಗಿ ಅಲೆಯುವುದು ಪುಟ್ಟ ಪೂರಾಅದು ನಮ್ಮ ಊರು ಇದು ನಿಮ್ಮ ಊರು ತಂತಮ್ಮಊರು ಧೀರಅದರೊಳಗೆ ನಾವು ನಮ್ಮೊಳಗೆ ತಾವು ಅದು ಇಲ್ಲವಣ್ಣ ದೂರ ಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆಹರಿತದ ಭಾವ, ಬೇರಿತದ ಜೀವ ಅದರೊಳಗೆ ಒಳಗೆ ಒಳಗೆಕರೆ ಬಂದಿತಣ್ಣ, ತೆರೆ ಬಂದಿತಣ್ಣ, ನೆರೆ ಬಂದಿತಣ್ಣ ಬಳಿಗೆಹರಿತದ ಭಾವ, […]

ಮಗನ ಮನೆಯಲ್ಲಿ

ಮಗನಾಗಿ ಬರೆಯುತ್ತಿದ್ದೇನೆ ಎಂದು ತಿಳಿದುಕೊಳ್ಳುವುದಕ್ಕಿಂತ ‘ಸಾಮಾನ್ಯವಾಗಿ ಈ ರೀತಿಯಾದ ಅನುಭವ ನಾವೆಲ್ಲರೂ ನೋಡಿರುತ್ತೇವೆ’ ಎಂದು ತಿಳಿದು ಬರೆಯುತ್ತೀದ್ದೇನೆ ಅದೇ ಅರ್ಥದಲ್ಲಿ ಓದಿದರೆ ನನ್ನ ಉದ್ದೇಶ ಸಾರ್ಥಕವೆಂದು ತಿಳಿಯುತ್ತೇನೆ. ಇಲ್ಲಿ ಹಿರಿಯರ ಸ್ವಾಭಿಮಾನ ಮತ್ತು ಆತ್ಮಗೌರವವನ್ನು ಒಮ್ಮೆ ನೋಡೋಣ! ಅಪ್ಪ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮುಖ್ಯ ಉಪಾಧ್ಯಾಯರಾಗಿದ್ದರು. ಮೂಲತಃ ಗ್ರಾಮ್ಯ ಕುಟುಂಬದಿಂದ ಬಂದಿದ್ದರಿಂದ ಕಷ್ಟಸಹೀಷ್ಣುತೆ, ಸರಳತೆ, ಹೆದರಿಕೆಯ ಮನೋಭಾವ ಸಹಜವಾಗಿತ್ತೆಂದು ನನ್ನ ನಂಬಿಕೆ. ಪರಾವಲಂಬನೆಯಲ್ಲಿ ಅರ್ಥವಿಲ್ಲ ಎಂದು ಗಾಢವಾಗಿ ನಂಬಿದ ವಕ್ತಿಯಲ್ಲಿ ನಾನು ನೋಡಿರುವುದು, ನೋಡುತ್ತಿರುವುದು ಒಬ್ಬಮಗನಾಗಿ, ಮೂರನೆಯವನಾಗಿ. […]

ಸೋಮಾರಿತನ

ನಾವುಗಳು ಕೆಲಸ ಮಾಡದ್ದಿದ್ದಾಗ ಏಕೆ ನೆಪ ಹೇಳುತ್ತೇವೆ? ೧೦೦ಕ್ಕೆ ೯೦ ಸಲ ಸೋಮಾರಿತನದಿಂದ, ಇದು ಎಲ್ಲರಿಗೂ ತಿಳಿದ ವಿಷಯ, ಆದರೂ ನಮ್ಮದೇ ಸರಿ ನಮ್ಮದೇ ನಿಜ. ಈ ದಿನಗಳಲ್ಲಿ IT ಬಿದ್ದಿದೆ, ಎಲ್ಲರಿಗೂ ಒಂದೇ ಚಿಂತೆ, “ಕೆಲಸ ಹೋದರೆ??”. ಹೋದರೆ ಹೋಗಲಿ, … ಇದೊಂದೇ ಜೀವನವಲ್ಲ, ಇದರಾಚೆಗೂ ಜೀವನವಿದೆ. ಸಾವಿರಾರು ಜನ IT ಇಲ್ಲದೆ ಬದುಕುತ್ತಿಲ್ಲವೇ? ಸ್ವತಂತ್ರವಾಗಿ ಬದುಕಲು ಹಲವು ಮಾರ್ಗಗಳಿವೆ, ವಿಶಾಲವಾದ ಭೂಮಿ ನಮ್ಮನ್ನು ಸಾಕಿ ಸಲಹಲೆಂದೆ ತಳೆದಿದ್ದಾಳೆ.ಪ್ರಗತಿ ಓದಿನಿಂದ ಮಾತ್ರವಲ್ಲ, ಸರಿಯಾದ ರೀತಿಯಲ್ಲಿ ಬುದ್ಧಿ ಬಳಕೆಯಾದರೆ […]

ಸುಳ್ಳು ಹೇಳಿ

ಬೆಳಗ್ಗೆ ೭:೩೦ ರ ಬಸ್ಸಿಗೆ ಹೊರಡಬೇಕಿತ್ತು. ನನ್ನ ಸೋಮಾರಿತನದಿಂದ ಹೊರಡಲಾಗಲಿಲ್ಲ. ಮೀರಾಳ ತಂದೆ ಬಸ್ ಸ್ಟ್ಯಾಂಡ್ ಗೆ ಡ್ರಾಪ್ ಮಾಡಿದ ಕಾರಣ ಬೇಗ ಹೊರಟೆ. ನಾನೇ ಹೊರಟಿದ್ದರೆ ಇನ್ನೂ ಲೇಟ್ ಆಗುತಿದ್ದೆ. ಬಹಳ information ಸಿಗುತ್ತದೆ ಎಂದು ಎಲ್ಲ ಕನ್ನಡ ದಿನ ಪತ್ರಿಕೆಗಳನ್ನು ಕಡೆಗಣಿಸಿ ‘ಡೆಕ್ಕನ್ ಹೆರಾಲ್ಡ್’ ದಿನ ಪತ್ರಿಕೆಯನ್ನು ಕೊಂಡದ್ದಾಯಿತು. ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಹಿಡಿದು ಮೈಸೂರಿನಿಂದ ಶಿವಮೊಗ್ಗ ಮಾರ್ಗವಾಗಿ ಅರಸೀಕೆರೆಗೆ ಹೋಗುವ ಬಸ್ ಬಳಿಬಂದೆ. ಈ ಬಸ್ ಅರಸೀಕೆರೆಗೆ ಹೋಗುತ್ತದಾ ಎಂದು ಪ್ರಶ್ನಿಸಿದಾಗ […]

ಹಸಿವು, ಗ್ರಾಹಕ, ಅಡುಗೆಕಲೆ

ಹಸಿವು, ಗ್ರಾಹಕ, ಅಡುಗೆಕಲೆ ನಾನು ಕಾಲತ್ಮಕವಾಗಿ ಅಡುಗೆಮಾಡೋದನ್ನ ಕೇಳಿದ್ದೆ ಅಷ್ಟೇ ನೋಡಿರ್ಲಿಲ್ಲ !! ಇದು ಸ್ವಲ್ಪ ಉದ್ದನೆ ವೀಡಿಯೊ  ನೀವು ಸ್ವಲ್ಪ ತಾಳ್ಮೆಇಟ್ಟು ನೋಡಿ !  ಏನಪ್ಪಾ ಬೇಗ ಮುಗಿತಾಇಲ್ಲಾಂತ ಕ್ಲೋಸ್ ಮಾಡ್ಬೇಡಿ 🙂ಕಲೆಗೆ ಯಾವ ಸೀಮೆನೂ ಇಲ್ಲ . . ಯಾವ ಎಲ್ಲೆನೂ ಇಲ್ಲ . . ಹಸಿವು, ಗ್ರಾಹಕ, ಅಡುಗೆಕಲೆ !! ಆಹಾ !!!! ಏನ್ ಸಮ್ಮಿಶ್ರಣ ನೋಡಿ !! ಸೂಪರ್-ಡೂಪರ್

ಸಂಖ್ಯೆಗಳು ಅಂಕಗಳಿಗಷ್ಟೇ ಸೀಮಿತವಲ್ಲ!

೧೯೯೩ (1993), ನನ್ನ  ಮನೆಯ ಮೇಲೆ ನಾನು, ನನ್ನ ಗೆಳೆಯರಾದ ಗುರುರಾಜ, ಶಿವಪ್ರಕಾಶ ಎಲ್ಲರೂ ೨ನೇ (2ನೇ) PUC ಪರೀಕ್ಷೆಗಾಗಿ ಕೂಡು-ಅಧ್ಯನ (combined study) ನಡೆಸಿದ್ದೆವು. ಮನೆಯ ಮುಂದೆ ನನ್ನ ಕಾಲೇಜಿನ ಆಟದ ಮೈದಾನ (ಕಾಲೇಜು ಕಟ್ಟಡದ ಹಿಂದಿನ ಭಾಗ), ಮೈದಾನಕ್ಕೆ ತೆರೆದಂತೆ ನನ್ನ ಮನೆ (ಅಪ್ಪನ ಮನೆ :)).  ಮನೆಯ ಮುಂದೆ ಪೊಲೀಸ್ ಕ್ವಾರ್ಟ್ರಸ್ ನಿಂದ ನೇರವಾಗಿ ಬರುವ ಮಣ್ಣಿನ ರಸ್ತೆ, ರಸ್ತೆಯ ಒಂದು ಬದಿ ಮನೆಗಳು, ಮತ್ತೊಂದು ಬದಿ ಪಾರ್ಥೇನಿಯಂ ಗಿಡಗಳಿಂದ ಕೂಡಿದ, ಕಾಲೇಜು ಮೈದಾನಕ್ಕೆ ಅಂಟಿಕೊಂಡ ಮುಳ್ಳಿನ ಬೇಲಿ. ಮನೆಯ ಮೇಲಿನ ಸಣ್ಣ […]

ಮಕ್ಕಳು ದೊಡ್ಡವರನ್ನು ನೋಡಿ ಕಲಿಯುತ್ತವೆ

ಇದನ್ನು ನೋಡಿದರೆ ತುಂಬಾ ದುಃಖವಾಗುತ್ತದೆ. ನಾನು ಎಷ್ಟೋ ಸಲ ಈ ರೀತಿಯಾದ ಪರಿಸ್ಥಿತಿಯನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಹೇಳಲಾಗದೆ ನೋಡಲಾಗದೆ ಅಸಹಾಯಕನಾಗಿ ವರ್ತಿಸಿದ್ದೇನೆ. ಒಬ್ಬ ತಾಯಿ ತನ್ನ ೮(8) ವರ್ಷ ಮತ್ತು ೪(4) ವರ್ಷದ ಮಕ್ಕಳನ್ನು ಇಲ್ಲಿ ಕೆಳಗೆ ಬಳಸಿದ ಶಬ್ದಗಳನ್ನು ಉಪಯೋಗಿಸಿ ಬಯ್ಯುವುದನ್ನು ನೋಡಿದ್ದೇನೆ. ನಾನು ಸತ್ತರೆ ಸ್ಮಶಾನದಲ್ಲಿ ಬಂದು ಬೆಂಕಿ ಹಚ್ಚಿ ಸುಡು ನನ್ನನ್ನು ನಾನು ಸತ್ತರೆ ನನ್ನ ತಿಥಿ ಮಾಡಬೇಡ ನಾನು ಸತ್ತರೆ ನೆಮಗೆಲ್ಲಾ ಸಂತೋಷ, ಸ್ವಲ್ಪ ಎಳ್ಳು ನೀರು ಬಿಟ್ಟುಬಿಡಿ ಬೋಳಿಮಗನೆ ನಿನ್ನ ಸಾಯಿಸಿ […]

ನಾನೇನು ಮಾಡಬೇಕು ?

ಜನಗಳ ಜೊತೆ ಸ್ಪಂದಿಸುವಾಗ / ಮಾತಾಡುವಾಗ ಇರಬೇಕಾದ (ತೋರಬೇಕಾದ) ಮೂಲಭೂತ ಗುಣಗಳು (ವಿಚಾರಗಳು) ಟೀಕೆ ಮಾಡಬೇಡಿ, ದೂರು ಹೇಳಬೇಡಿ, ಅವಹೇಳನ ಮಾಡಬೇಡಿ ನಿಜವಾದ ಮತ್ತು ಆತ್ಮೀಯವಾಗಿ ಪ್ರಶಂಸೆ ಮಾಡಿ ಬೇರೆಯವರ ಆಸೆಗೆ ಅವರ ಬಯಕೆಗೆ ಬೆಲೆ ಕೊಡಿ – ಜೋರ್ಡನ್ ಲೆಜುವಾನ್ (ಹೈ ಎಕ್ಷಿಸ್ಟೆನ್ಸ್)

ನಾವು ಸುಳ್ಳೇಕೆ ಹೇಳುತ್ತೇವೆ?

ಭಯ / ಹೆದರಿಕೆ ನಾವು ಭಯದಲ್ಲಿ ಅಥವಾ ಹೆದರಿಕೆಯಿಂದ ಇದ್ದಾಗ ಸಾಮಾನವಾಗಿ ಸುಳ್ಳು ಹೇಳುತ್ತೇವೆ. ನಮಗೆ ಏನು ತಿಳಿಯದ ಭಯ. ಬೇರೆಯವರು ನಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೋ (ತಿಳಿಯುತ್ತಾರೋ) ಎಂಬ ಭಯ. ನಮ್ಮ ಬಗ್ಗೆ ಬೇರೆಯವರು ಏನು ಕಂಡುಹಿಡಿಯುತ್ತಾರೋ ಎಂಬ ಭಯ. ಪ್ರತಿಸಲ ನಾವು ಸುಳ್ಳುಹೇಳಿದಾಗ ನಮ್ಮ ಭಯ ಜಾಸ್ತಿಯಾಗುತ್ತಿರುತ್ತದೆ. ಇಲ್ಲದ್ದನ್ನು ಊಹೆಮಾಡಿಕೊಳ್ಳುತ್ತಾ, ಯಾವುದು ಮುಂದೆ ಆಗುತ್ತದೆ ಎಂದು ಈಗಲೇ ಊಹೆಮಾಡಿಕೊಳ್ಳುತ್ತಾ ಭಯಪಡುತ್ತಾ ಸುಳ್ಳುಹೇಳುತ್ತಿರುತ್ತಾರೆ. ಕೆಲವೊಮ್ಮೆತಪ್ಪು ಮಾಡಿ ಅದನ್ನು ಮುಚ್ಚಲು ಸುಳ್ಳು ಹೇಳುತ್ತಿರುತ್ತಾರೆ. ತಪ್ಪುಮಾಡಿದ್ದಕ್ಕಿಂತ ತಪ್ಪುಮಾಡಿಲ್ಲವೆಂದು ಸುಳ್ಳುಹೇಳುವುದು […]

ನಾನೇಕೆ ಬರೆಯಬೇಕು?

ಬರಹ ಸಾಹಿತ್ಯದ ಕಣ್ಣು. ಸಾಹಿತ್ಯ ಪ್ರಪಂಚದಾದ್ಯಂತ ಹರಡಲು ಬರಹವೇ ಕಾರಣ. ಭಾಷೆಯ ಉಗಮದ(ಹುಟ್ಟಿನ) ಜೊತೆ-ಜೊತೆಗೆ ಬಂದಿರುವುದು ಬರಹ. ನಾವು ತಾಳೆಗರಿಗಳ ಮೇಲಿನ ಬರಹಗಳನ್ನು ನೋಡಿದಾಗ ನಮ್ಮ ಜ್ಞಾನ ಸಂಗ್ರಹದ ಬಗ್ಗೆ ನಮಗೆ ಬರಹಗಳ ಪ್ರಾಮುಖ್ಯತೆ ತಿಳಿಯುತ್ತದೆ ಹಾಗು ಹೆಮ್ಮೆ ಎನಿಸುತ್ತದೆ. ಬರೆಯುವುದರಿಂದ ಹಲವಾರು ರೀತಿಯ ಬದಲಾವಣೆಗಳು ವೈಯಕ್ತಿಕವಾಗಿ ಹಾಗು ಸಾಮಾಜಿಕವಾಗಿ ನಡೆದಿರುವುದಕ್ಕೆ ಇತಿಹಾಸವೇ ಸಾಕ್ಷಿ. ಅದರಲ್ಲೂ ಜಗತ್ತಿಗೆ ಭಾರತದ ಬರಹಗಳ ಕೊಡುಗೆ ಅಪಾರ(ಬಹಳ). ವೇದ, ವಚನ, ಗದ್ಯ, ಪದ್ಯ, ನಾಟಕ, ಕಾದಂಬರಿ, ಮಹಾಕಾವ್ಯ ಹೀಗೆ ಹತ್ತು ಹಲವು. […]