ನಮ್ಮೆಲ್ಲರಲ್ಲೂ ಒಬ್ಬ ಕವಿ ಇದ್ದಾನೆ

ನಮ್ಮೆಲ್ಲರಲ್ಲೂ ಒಬ್ಬ ಕವಿ ಇದ್ದಾನೆ.. ನಾವೂ ಕವಿತೆಗಳನ್ನು ಕಟ್ಟಬಹುದು,ನಮ್ಮೆಲ್ಲರಲ್ಲೂ ಒಬ್ಬ ರವಿ ಇದ್ದಾನೆ.. ಬೆಳಕನ್ನು ನಾವೂ ಸಹ ಬೀರಬಹುದು,ಹೀಗೆ ಒ೦ದುಗೂಡಿ ನಡೆದರೆ ಸಾಕು, ಒ೦ದು ದಿನ ಕನ್ನಡಕ್ಕೆ ಎತ್ತರದ ಸ್ಥಾನ ಮಾನ ಗಿಟ್ಟಿಸಬಹುದು; ಬನ್ನಿ ಕನ್ನಡವನ್ನು ಮತ್ತೆ ಕಟ್ಟೋಣ,ಅಳಿಸಿ ಹೋಗಿರುವ ನೆನಪುಗಳನ್ನು ಮತ್ತೆ ನೆನೆಯೋಣ,ನಡೆದು ಬಂದ ದಾರಿ ಯಾವುದೇ ಇರಲಿ,ಮರೆತವರಿಗೆ ಕನ್ನಡಾಂಬೆಯ ಪರಿಚಯ ಮತ್ತೆ ಮಾಡಿಸೋಣ… ಜೈ ಕರ್ನಾಟಕ ಮಾತೆ —  ಶಮಂತ್

ಬೇಲಿಯ ಹೂವು

ಬೇಲಿಯ ಹೂವು ಏರದು ಮುಡಿಗೆ, ಬಣ್ಣದ ಹೂವದು ಕಾಣದು ಹೊರಗೆನೋಡಿತು ನೋಡುತ ನಲಿಯುತ ಹೇಳಿತು, ಸಂತಸ ಒಳಗಿದೆ ಹೊರಗಿಲ್ಲೆಂದಿತು ಗಿಡದಲೆ ಮೊಳೆತು, ಗಿಡದಲೆ ಅರಳಿ, ಸಸ್ಯದ ಸಾರವ ಹೀರುವೆ ನಾನುಬಾಡುವವರೆಗು ಸೃಷ್ಟಿಯ ಸಾರವ ಅಡೆ-ತಡೆ ಇಲ್ಲದೆ ಸವಿಯುವೆನೆಂದಿತು ನನ್ನನು ಯಾರು ನೋಡಿದರೇನು?, ಮಾತನಾಡಿಸದೆ ಹೋದರೆ ಏನು?ಸೂರ್ಯನ ಶಾಖದಿ, ಗಾಳಿಯ ಸ್ಪರ್ಶದಿ, ಮಂಜಿನ ಹನಿಯಲಿ ತೋಯುವೆನೆಂದಿತು ಚಿಲಿಪಿಲಿಗುಟ್ಟುತ, ಚೀರುತ ಹಾರುವ ಹಕ್ಕಿಯ ಬಳಗವೆ ನನ್ನಯ ಆಪ್ತರುಬಳುಕುತ ಬಳಸಿಹ ಬಳ್ಳಿಗಳೆಲ್ಲವು ಮಾತನು ಹರಟುವ ಮಿತ್ರರು ಎಂದಿತು ಯಾರಿಗು ಕಾಣದೆ ಮರೆಯಲಿ […]

ಬೀಸೋಕಲ್ಲಿನ ಪದ

ಚಿತ್ರ ಕೊಡುಗೆ : Image Courtesy ಕಲ್ಲಮ್ಮ ತಾಯಿ ಮೆಲ್ಲಮ್ಮ ರಾಗಿಯಜಲ್ಲ ಜಲ್ಲಾನೆ ಉದುರಮ್ಮಜಲ್ಲ ಜಲ್ಲಾನೆ ಉದುರಮ್ಮ ನಾ ನಿನಗೆಬೆಲ್ಲದಾರತಿಯ ಬೆಳಗೇನು, ಬೆಲ್ಲದಾರತಿಯ ಬೆಳಗೇನು ಅಂದುಳ್ಳ ಅಡಿಗಲ್ಲು ಚಂದುಳ್ಳ ಮೇಗಲ್ಲುಚಂದ್ರಮತಿಯೆಂಬ ಹಿಡಿಗೂಟಚಂದ್ರಮತಿಯೆಂಬ ಹಿಡಿಗೂಟ ಹೀಡುಕೊಂಡುತಂದೆ-ತಾಯಿಗಳ ನೆನೆದೇನ, ತಂದೆ-ತಾಯಿಗಳ ನೆನೆದೇನ ರಾಗಿಯು ಮುಗಿದಾವು ರಾಜನ್ನ ಹೆಚ್ಚ್ಯಾವುನಾನ್ ಹಿಡಿದ ಕೆಲಸ ವದಗ್ಯಾವುನಾನ್ ಹಿಡಿದ ಕೆಲಸ ವದಗ್ಯಾವು ರಾಗಿಕಲ್ಲೇನಾ ತೂಗಿ ಬಿಡುತೀನಿ ಬಲದೋಳು, ನಾ ತೂಗಿ ಬಿಡುತೀನಿ ಬಲದೋಳು ಕಲ್ಲು ಬಿಟ್ಟೇನೆಂದು ಸಿಟ್ಟ್ಯಾಕೆ ಸರಸತಿಯೇಕುಕ್ಕೇಲಿ ರಾಗಿ ಬೆಳೆಯಾಲಿಕುಕ್ಕೇಲಿ ರಾಗಿ ಬೆಳೆಯಾಲಿ, ತಕ್ಕೊಂಡುಮತ್ತೆ […]

ಪಟ್ಟ ಕಟ್ಟ ಬೇಡಿ

ಅತ್ತ ಪುಲಿ ಇತ್ತ ದರಿ ಎಂಬುದೇ ಭ್ರಮೆ.ಹುಟ್ಟಲಾರದ ಅಪೇಕ್ಷೆಯ ಅರಿವಿನಅಸಂಗಥದ ವಾಸ್ತವಕ್ಕೆಏನೇನೂ ಅಳುಕಿನ, ಅಸಯ್ಯದ ಹೇಲು ಸಾರಿಸಿ,ಅಲ್ಲೇ ಮೃಷ್ಟಾನ್ನ ಭೋಜನಅಪಥ್ಯವಾದ ಮಿಥ್ಯಗಳಬೊಜ್ಜು ಹೊಟ್ಟೆ ಪ್ರಪಂಚಕ್ಕೆ ಸುಖದ ಸಂಕೇತ.ದ್ವಂದ್ವಗಳ ತಿಕ್ಕಾಟದ ಮನಸ್ಸು, ಅವರಿಗೆಹರೆಯದ ಕಾಮ ತೀಟೆ; ಇನ್ನು ‘ಸತ್ಯ’ಸನ್ಯಾಸಿಯ ಪದವಂತೆ! ಅದರ ಹೊನಲಿನಹುಡುಕಾಟದ ಯತ್ನಕ್ಕೆ ಕರ್ಕಶವಾದ ನಗುವಿನ ಕೇಕೆ;ನಿಂತಿರುವುದು ಕಕ್ಕದಲ್ಲಾದರೇನು; ನಾನೋ ಹಾತೊರೆವ ಸ್ವಾತಂತ್ರಕ್ಕೆಹಾದರದ ಬೆಲೆ ಕಟ್ಟಲಾರೆ.ಆತುರಕ್ಕೆ ಕರೆದಾಕೆ ಕೊಟ್ಟ ತೃಪ್ತಿ ಕ್ಷಣಿಕ ನನಗೆ;ಆಕೆ ಪಡೆದದ್ದು ಬಯಕೆಯ ಕಾಸು.ಕೊಟ್ಟ ತೃಪ್ತಿಯ ಆದರಿಸದಿದ್ದುದು ನನ್ನ ಕೊಳಕೋ?ಕಾಣಿಕೆಯದಾಚೆಗಿನ ಬಯಕೆ ಬಯಸಲಾರದ್ದು ಅವಳ […]