ನಮ್ಮೆಲ್ಲರಲ್ಲೂ ಒಬ್ಬ ಕವಿ ಇದ್ದಾನೆ.. ನಾವೂ ಕವಿತೆಗಳನ್ನು ಕಟ್ಟಬಹುದು,
ನಮ್ಮೆಲ್ಲರಲ್ಲೂ ಒಬ್ಬ ರವಿ ಇದ್ದಾನೆ.. ಬೆಳಕನ್ನು ನಾವೂ ಸಹ ಬೀರಬಹುದು,
ಹೀಗೆ ಒ೦ದುಗೂಡಿ ನಡೆದರೆ ಸಾಕು, ಒ೦ದು ದಿನ ಕನ್ನಡಕ್ಕೆ ಎತ್ತರದ ಸ್ಥಾನ ಮಾನ ಗಿಟ್ಟಿಸಬಹುದು;
ಬನ್ನಿ ಕನ್ನಡವನ್ನು ಮತ್ತೆ ಕಟ್ಟೋಣ,
ಅಳಿಸಿ ಹೋಗಿರುವ ನೆನಪುಗಳನ್ನು ಮತ್ತೆ ನೆನೆಯೋಣ,
ನಡೆದು ಬಂದ ದಾರಿ ಯಾವುದೇ ಇರಲಿ,
ಮರೆತವರಿಗೆ ಕನ್ನಡಾಂಬೆಯ ಪರಿಚಯ ಮತ್ತೆ ಮಾಡಿಸೋಣ…
ಜೈ ಕರ್ನಾಟಕ ಮಾತೆ
— ಶಮಂತ್