ಒಳ್ಳೆಯ ಮಾತುಗಳು

ಬಹಳ ಜನ ಜೀವನದಲ್ಲಿ ಸಾಕಷ್ಟು ಅನುಭವವನ್ನು ಒಂದು ಸಣ್ಣ ವಾಖ್ಯದಲ್ಲಿ ಅಥವಾ ಒಂದು ಸಾಲಿನ ಮಾತಿನಲ್ಲಿ ಯಾವುದಾದರೊಂದು ಸಂದರ್ಭದಲ್ಲಿ ಬಳಸಿರುತ್ತಾರೆ.

ಆ ಮಹಾನುಭಾವರ ಮಾತು ಜೀವನದ ಮಾರ್ಗವನ್ನೋ, ಸರಳ ಯೋಚನೆಯನ್ನೋ, ಮನುಷ್ಯನ ಬದುಕಿನ ಉದ್ದೇಶವನ್ನೋ ಹೇಳುವುದೆಂದು ನನ್ನ ನಂಬಿಕೆ. ಈ ರೀತಿಯ ಸಾಲುಗಳಲ್ಲಿ ದಿಟವಾದ ಅರ್ಥವಿರುತ್ತದೆ.

ತಕ್ಷಣಕ್ಕೆ ಒಪ್ಪದಿದ್ದರೂ ನಿಧಾನವಾಗಿ ತಾಳ್ಮೆಯಿಂದ ಯೋಚಿಸಿದಾಗ ಈ ಮಾತಿನ ತಿರುಳು ತಿಳಿಯುತ್ತದೆ.

ಈ ಮಾತುಗಳನ್ನು / ಸಾಲುಗಳನ್ನು ಬರೆದವರ / ಸೃಷ್ಠಿಸಿದವರ ನೆನಪು ನನಗೆ ಇಲ್ಲವಾದರೂ, ಬೇರೆಯವರರಿಂದ ಕೇಳಿರುವುದನ್ನು ಬರೆಯುತ್ತಿದ್ದೇನೆ.

  1. ಕಾಲ ಎಲ್ಲದಕ್ಕೂ(ಎಲ್ಲ ಪ್ರಶ್ನೆಗಳಿಗೂ) ಉತ್ತರ ಕೊಡುತ್ತದೆ?
  2. ಸಮಯ ಬಹಳ ದೊಡ್ಡ ಶಿಕ್ಷಕ / ಸರಿಯಾಗಿ ಪಾಠ ಕಲಿಸುತ್ತದೆ
  3. ಯಾವುದನ್ನೂ ನೋಡಿದ ತಕ್ಷಣವೇ ನಿರ್ಣಯಿಸಬಾರದು ಅಥವಾ ನಿರ್ಧರಿಸಬಾರದು !
  4. ಕಷ್ಟಗಳು ಮನುಷ್ಯನನ್ನು ಗಟ್ಟಿ ಮಾಡುತ್ತವೆ
  5. ಮನುಷ್ಯರು ತಮ್ಮೊಂದಿಗೆ ಸ್ಪರ್ಧಿಸಬೇಕು(ಪೈ-ಪೋಟಿ ಮಾಡಬೇಕು) ಬೇರೆಯವರೊಂದಿರೆ ಅಲ್ಲ !
  6. ಸಣ್ಣ-ಪುಟ್ಟ ಕೆಲಸದಲ್ಲಿ ಸಿಗುವ ತೃಪ್ತಿಯೂ ದೊಡ್ಡ ಕೆಲಸದಲ್ಲಿ ಸಿಗುವ ತೃಪ್ತಿಯಷ್ಟೇ ಮಹತ್ವದ್ದಾಗಿರುತ್ತದೆ, ತೃಪ್ತಿಯಲ್ಲಿ ಭೇದವಿಲ್ಲ !
  7. ಸಮರಸವೇ ಜೀವನ !
  8. ಪ್ರೀತಿ ! ದೇಶ, ಭಾಷೆ, ಜಾತಿ, ಮತ, ಅಂತಸ್ತು, ಲಿಂಗ, ವಯಸ್ಸು, ಪಾಂಡಿತ್ಯ ಎಲ್ಲವನ್ನೂ ಮೀರಿ ನಿಂತಿದೆ !
  9. ತನ್ನನ್ನು ತಾನು ಗೌರವಿಸದವನು ಬೇರೆಯವರನ್ನು ಗೌರವಿಸುವುದಿಲ್ಲ.
  10. ಮಾತಿನಲ್ಲಿ ಹಿಡಿತವಿಲ್ಲದನ ವಿಚಾರ  ಪ್ರಯೋಜನವಿಲ್ಲದ ನೀರಿನಂತೆ!
  11. ನಾವು ಯಾವುದನ್ನು ತೋರೆದು(ಬಿಟ್ಟು) ಹೋಗುತ್ತೇವೋ ಅದರ ಹಿಂದೇ ನಮ್ಮ ಜೀವನದ ಪೂರ್ತಿ ಓಡುತ್ತಿರುತ್ತೇವೆ.
  12. ನೀವೇನಾದರೂ ಇತ್ತೀಚಿಗೆ ಉಪಯೋಗಕ್ಕೆ ಬರುವುದನ್ನು ಮಾಡಿದ್ದೀರಾ? ಎಂದು ನಮ್ಮನ್ನೇ ನಾವು ಪ್ರಶ್ನೆ ಮಾಡಬೇಕು.
  13. ನಿಮಗೆ ವಯಸ್ಸಾದಾಗ ನೀವು ಏನನ್ನು(ಯಾವುದನ್ನು) ನೀರೀಕ್ಷಿಸುತ್ತೀರ?
  14. ಸಮಯದ ಮೌಲ್ಯ ಹಣದಿಂದ ಕಟ್ಟಲಾಗುವುದಿಲ್ಲ.
  15. ಕೆಲವೊಮ್ಮೆ ಜೀವನ, ಸುಲಭ ಮತ್ತು ಸಮಾನ ಎನಿಸುವುದಿಲ್ಲ; ಆದರೂ ಜೀವನ ಅತ್ಯಂತ ಸುಂದರ (ಜೀವನವೇ ಹೀಗೆ, ಕಷ್ಟವಿದ್ದರೆಮಾತ್ರ ಸುಖದ ಅನುಭವ)
  16. ಗೊಂದಲ ಅಥವಾ ಸುಂಶಯದಲ್ಲಿದ್ದಾಗ, ಮುಂದಿನ ಪುಟ್ಟ ಪುಟ್ಟ ಹೆಜ್ಜೆಯನ್ನು ಆಯ್ದುಕೊಳ್ಳಬೇಕು.
  17. ಜೀವನದ ಮಧುರ ಕ್ಷಣಗಳನ್ನು ಆನಂದಿಸದಿರಲು (ಅನುಭವಿಸದಿರಲು) ಜೀವನ ಬಹಳ ಚಿಕ್ಕದು.
  18. ನೀವು ಅನಾರೋಗ್ಯದಿಂದ ಬಳಲುವಾಗ ನಿಮ್ಮ ಕೆಲಸ ನಿಮ್ಮನ್ನು ಕಾಯುವುದಿಲ್ಲ ! ಕಾಯುವುದು ನಿಮ್ಮ ಗೆಳೆಯರು ಮತ್ತು ಕುಟುಂಬದವರು ಮಾತ್ರ !
  19. ನಿಮಗೆ ಬೇಡದಿರುವುದನ್ನು ಕಂಡುಕೊಳ್ಳುವುದರಲ್ಲಿ ಅರ್ಥವಿಲ್ಲ, ನಿಮ್ಮ ಅಂತರಾಳ ಕೆಳಿದರೆ ಮಾತ್ರ ಪ್ರಯತ್ನಿಸಿ !
  20. ನೀವು ಎಲ್ಲ ಜಗಳದ ಮಾತುಗಳನ್ನು ಗೆಲ್ಲಬೇಕಿಲ್ಲ, ನಿಮಗೆ ನೀವು ಸತ್ಯವಾಗಿದ್ದರೆ ಸಾಕು ! ನಿಮಗೆ ನೀವು ಸತ್ಯವಾಗಿರಿ (ನಿಜವಾಗಿರಿ)
  21. ಬೇರೆಯವರೊಂದಿಗೆ ನಿಮ್ಮ ದುಃಖವನ್ನು ಹಂಚಿಕೊಳ್ಳಿ ! ಒಬ್ಬರೆ ಅಳುವುದಕ್ಕಿಂತ / ದುಃಖಿಸುವುದಕ್ಕಿಂತ ಸಾಂತ್ವನಕಾರಿಯಾಗಿರುತ್ತದೆ (ಸಮಾದಾನಕರವಾಗಿರುತ್ತದೆ)
  22. ದೇವರು ಮಾತ್ರ ನಿಮ್ಮ ಕೋಪವನ್ನು ಸಹಿಸಿಕೊಳ್ಳುತ್ತಾನೆ, ಮನುಷ್ಯರಿಂದಾಗುವುದಿಲ್ಲ, ಮನುಷ್ಯರು ತಿರುಗಿಬೀಳುತ್ತಾರೆ.
  23. ಯಾವುದು ನಿಮಗೆ ಸರಿಹೊಂದುತ್ತದೆಯೋ, ಬೇಕಾಗಿದೆಯೋ, ಅವಶ್ಯಕವೋ ಅದಕ್ಕಾಗಿ ಮಾತ್ರ ಉಳಿಸಿ.
  24. ನಿಮ್ಮ ಹಿಂದಿನ ದಿನಗಳಲ್ಲಿ ನಡೆದ ಘಟನೆಗಳ ಬಗ್ಗೆ ಶಾಂತಿಯುತವಾಗಿ ವರ್ತಿಸಿ! ಹಳೆಯದ್ದನ್ನು ನೆನೆಯುತ್ತಾ ಈ ಕ್ಷಣವನ್ನು ಹಾಳುಮಾಡಿಕೊಳ್ಳಬೇಡಿ !
  25. ನೀವು ನಿಮ್ಮ ಮಕ್ಕಳ ಮುಂದೆ ಅಳುವುದರಿಂದ ಯಾವ ತೊಂದರೆಯೂ ಇಲ್ಲ !
  26. ನೀವು ನಿಮ್ಮ ಜೀವನವನ್ನು ಬೇರೆಯವರ ಜೀವನದ ಜತೆ ಹೋಲಿಕೆ ಮಾಡಬೇಡಿ, ಅವರ ಜೀವನದ ದಾರಿಯ ಬಗ್ಗೆ ಅವರ ಕಷ್ಟಗಳ ಬಗ್ಗೆ ನಿಮಗೆ ಯಾವ ಅರಿವೂ ಇರುವುದಿಲ್ಲ !
  27. ಯಾವುದೇ ಸಂಬಂಧ ಗೌಪ್ಯವಾಗಿಡಬೇಕಾಗಿ ಬಂದ ಸಂದರ್ಭದಲ್ಲಿ ಅತ್ಯುತ್ತಮವೆಂದರೆ, ಅಂತಹ ಸಂಬಂಧ ಗಳಿಂದ ದೂರ ನಿಲ್ಲಿ.
  28. ಈ ಪ್ರಕೃತಿಯಲ್ಲಿ ಎಲ್ಲವೂ ಕಣ್ಣುಮುಚ್ಚಿ ಕಣ್ತೆರೆಯುವುದರಲ್ಲಿ ಬದಲಾಗಬಹುದು ಅದರೆ ಸತ್ಯ ಮಾತ್ರ ಬದಲಾಗುವುದಿಲ್ಲ.
  29. ಒಂದು ಧೀರ್ಘ ಉಸಿರು, ಮನಸ್ಸಿನ್ನ ಎಲ್ಲ ಒತ್ತಡಗಳನ್ನು ಅಡಗಿಸುತ್ತದೆ (ನೆಮ್ಮದಿ ನೀಡುತ್ತದೆ)
  30. ಯಾವುದು ಉಪಯೋಗವಿಲ್ಲವೋ, ಪ್ರಯೋಜನವಿಲ್ಲವೋ ಅದನ್ನು ಬುಡದಿಂದ ಕಿತ್ತು ಬಿಸಾಡಿ (ಗೋಜಲುಗಳು, ಗಲಿಬಿಲಿ ಮನುಷ್ಯನ ಭಾರವನ್ನು ಹೆಚ್ಚಿಸುತ್ತದೆ)
  31. ಯಾವುದು ನಿಮನ್ನು ಕೊಲ್ಲುವುದಿಲ್ಲವೋ, ಅದೇ ನಿಮ್ಮನ್ನು ಗಟ್ಟಿ ಮಾಡುವುದು.
  32. ಖುಷಿಯಾಗಿರುವುದಕ್ಕೆ ಇನ್ನು ಕಾಲ ಮಿಂಚಿಲ್ಲ ! ಖುಷಿಯಾಗಿರಲು ನಿಮ್ಮಲ್ಲಿ ಮಾತ್ರ ಅಡಗಿದೆ ಬೇರಿಯವರಲಿಲ್ಲ, ಖುಷಿಯಾಗಿರುವುದು ಅಥವಾ ದುಃಖದಲ್ಲಿರುವು ನಿಮಗೆ ಮಾತ್ರ ಬಿಟ್ಟದ್ದು.
  33. ಜೀವನದಲ್ಲಿ ಯಾವುದನ್ನು ನೀವು ಪ್ರೀತಿಸಿ ಹೊಂದಬಯಸುತ್ತೀರೋ ಅದನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿ, ಪ್ರಯತ್ನವಿಲ್ಲದೆ ಯಾವುದೂ ದೊರಕುವುದಿಲ್ಲ.
  34. ಹೊಸ ಹೊಸ ವಸ್ತುಗಳನ್ನು ಈಗಲೇ ಉಪಯೋಗಿಸಿ, ನಾಳೆಗೆಂದು ಇಡಬೇಡಿ, ಯಾವುದೋ ಮುಖ್ಯವಾದ ಸಂದರ್ಭಕ್ಕಾಗಿ ಕಾಯಬೇಡಿ. ಈ ಕ್ಷಣ ಅಮೂಲ್ಯ, ಈ ಕ್ಷಣ ಮುಖ್ಯ.
  35. ಯಾವುದೇ ವಿಚಾರವಿರಬಹುದು, ಯಾವುದೇ ಕೆಲಸವಿರಬಹುದು, ಬಹಳ ಚೆನ್ನಾಗಿ ಸಿದ್ಧರಾಗಿ. ನಿಖರವಾದ ಮತ್ತು ವಿವರವಾದ ಸಿದ್ಧತೆಯೊಂದಿಗೆ ಕೆಲಸ ಮಾಡಿ.
  36. ಮಧುರ ಕ್ಷಣಗಳನ್ನು ಇಂದೇ ಅನುಭವಿಸಿ, ಮುದಿತನದಲ್ಲಿ ಅನುಭವಿಸುತ್ತೇನೆ ಎಂದು, ವಯಸ್ಸಾದಮೇಲೆ ಅನುಭವಿಸುತ್ತೇನೆ ಎಂದು ಕಾಯಬೇಡಿ.
  37. ಬಹಳ ಮುಖ್ಯವಾದ ಅಂಗವೆಂದರೆ ನಿಮ್ಮ ಮೆದುಳು !! ಇದನ್ನು ಆರಿಯಿರಿ ಅರಿತು ಬಾಳಿರಿ.
  38. ಜೀವನದಲ್ಲಿ ಬರುವ ಎಲ್ಲ ವಿಪತ್ತುಗಳಿಗೆ(ಕಷ್ಟ) ತಲೆಕೆಡಿಸಿಕೊಳ್ಳದೆ ಈ ಪ್ರಶ್ನೆಯನ್ನು ನಮಗೆ ನೀವೇ ಕೇಲಿಕೊಳ್ಳಿರಿ ‘ಐದು ವರ್ಷಗಳಲ್ಲಿ ಈ ವಿಪತ್ತು(ಕಷ್ಟ) ನಮಗೆ ಏನು ಮಾಡೀತು?’.
  39. ಜೀವನವನ್ನು ನೀವುಮಾತ್ರ ಆಯ್ದುಕೊಳ್ಳಬೇಕು…ನೀವು ಮಾತ್ರ ! ನೀವು ಮಾತ್ರ ಆಯ್ದುಕೊಳ್ಳಲು ಸಾಧ್ಯ !!
  40. ಎಲ್ಲವನ್ನು ಎಲ್ಲರನ್ನು ಕ್ಷಮಿಸಿ ಆದರೆ ಮರೆಯಬೇಡಿ.
  41. ಬೇರೆಯವರು ನಿಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎಂದು ಯೋಚಿಸಬೇಡಿ, ಅದು ನಿಮ್ಮ ಕೆಲಸವಲ್ಲ.
  42. ಸಮಯ/ಕಾಲ ಎಲ್ಲವನ್ನು ಮಾಯಿಸುತ್ತದೆ / ವಾಸಿಮಾಡುತ್ತದೆ. ಎಲ್ಲದಕ್ಕೂ ಸಮಯ ಕೊಡಿ.
  43. ಸಂದರ್ಭ ಎಷ್ಟೇ ಒಳ್ಳೆಯದಿದ್ದರು ಕೆಟ್ಟದಿದ್ದರೊ ಬದಲಾಗಲೇಬೇಕು ಆದ ಬಾಳಿನ ನಿಮಯ. ಬದಲಾಗೇಆಗುತ್ತದೆ.
  44. ನಿನ್ನನು ನೀನು ತುಂಬಾ ಗಂಭೀರವಾಗಿ ಪರಿಗಣಿಸಬೇಡ, ನಿನ್ನ ಬಗ್ಗೆ ಬೇರೆಯವರು ತಲೆ ಕೆಡಿಸಿಕೊಳ್ಳುವುದಿಲ್ಲ.
  45. ಪವಾಡದಲ್ಲಿ ನಂಬಿಕೆ ಇರಲಿ.
  46. ನಿನ್ನಲ್ಲೇ ದೇವರು ದೇವರಲ್ಲೇ ನೀನು
  47. ಜೀವನವನ್ನು ಪರೀಕ್ಷಿಸಬೇಡ ಬದಲಾಗಿ ಜೀವನವನ್ನು ಪ್ರೀತಿಸು. ಬದುಕನ್ನು ಪ್ರೀತಿಸು.
  48. ನಿಮ್ಮ ಮಕ್ಕಳಿಗೆ ಒಂದೇ ಬಾಲ್ಯ ದೊರೆಯುವುದು..
  49. ಪ್ರತಿದಿನ ಹೊರಗೆ ಹೋಗಿ ಪ್ರಕೃತಿಯನ್ನು ಅನುಭವಿಸಬೇಕು. ಆಶ್ಚರ್ಯ ಅನುಭವಿಸಿದರೆ ಮಾತ್ರ.
  50. ನಾವು ನಮ್ಮ ಕಷ್ಟಗಳನ್ನು ಒಂದು ರಾಶಿಯಾಗಿಮಾಡಿ, ಬೇರೆಯವರ ಕಷ್ಟಗಳ ರಾಶಿರಳನ್ನು ನೋಡಿದಾಗ, ನಮ್ಮ ಕಷ್ಟಗಳ ರಾಶಿಯನ್ನು ಮತ್ತೆ ಬಾಚಿಕೊಳ್ಳುತ್ತೇವೆ.
  51. ಅಸೂಯೆ ಬರಿಯ ಸಮಯ ಹಾಳು. ನಮ್ಮಲ್ಲಿ ಯಾವುದು ಈಗಾಗಲೇ ಇರುವುದೋ ಅದನ್ನು ಒಪ್ಪಿಕೊಳ್ಳೋಣ, ಯಾವುದು ನಮಗೆಬೇಕೋ ಅದನ್ನು ಮಾತ್ರವಲ್ಲ !. ಇಲ್ಲದಿರುವುದನ್ನು ಸಂಪಾದಿಸೋಣ, ಕಿತ್ತುಕೊಳ್ಳುವುದು ಬೇಡ!
  52. ಉತ್ತಮವಾದದ್ದನ್ನು ಪಡೆಯುವುದಕ್ಕೆ ಸತತ ಸುಧಾರಣೆ ಬೇಕು.
  53. ಜೀವನ ಸುಂದರವಾದ ಆಕರ್ಷಕ ಡಬ್ಬಿಯಲ್ಲಿಲ್ಲ.
  54. ನಾವು ಪ್ರಪಂಚವನ್ನು ಅದು ಹೇಗೆ ಇರುವುದೋ ಹಾಗೆ ನೋಡುವುದಿಲ್ಲ, ನಾವು ಹೇಗೆ ಇರುವುವೆವೋ ಹಾಗೆ ನೋಡುತ್ತೇವೆ.
    – ಅನೈಸ್ ನಿನ್
  55. ಸಕಾರಾತ್ಮಕ ಮನಶ್ಶಕ್ತಿ ಇರುವವರು ಹೇಗೆ ಕೆಲಸವನ್ನು ಮಾಡಬಹುದು ಎಂದು ಕೇಳುತ್ತಾರೆ ವಿನಃ ಏಕೆ ಅದನ್ನು ಮಾಡಲಾಗುವುದಿಲ್ಲ ಎಂದು ಹೇಳುವುದಿಲ್ಲ.
    ಹೇಗೆ ಕೆಲಸವನ್ನು ಸಾಧಿಸಬಹುದು ಎನ್ನುವುದು, ಏಕೆ ಕೆಲಸವನ್ನು ಮಾಡಲಾಗುವುದಿಲ್ಲ ಎನ್ನುವುದಕ್ಕಿಂತ ಮಿಗಿಲಾಗಿರುತ್ತದೆ !
  56. ಸಕಾರಾತ್ಮಕವಾಗಿ ಯೋಚಿಸುವವರು ಒಮ್ಮೊಂಮ್ಮೆ ತಪ್ಪು ಯೋಚಿಸುವುದು, ಯಾವಾಗಲೂ ನಕಾರಾತ್ಮಕವಾಗಿ ಯೋಚಿಸುವವರು ಒಮ್ಮೊಂಮ್ಮೆ ಸರಿಯಾಗಿ ಯೋಚಿಸುವುದಕ್ಕಿಂತ ತರ್ಕಬದ್ಧವಾಗಿರುತ್ತದೆ.

Leave a Reply

Your email address will not be published. Required fields are marked *